ಮುಗ್ಧ
ಅವನೊಬ್ಬ ಮುಗ್ಧ , ಸ್ವಲ್ಪ ಹುಚ್ಚನೆ ಸರಿ, ಬದುಕು ಪೂರ್ತಿ ಸೆಣೆಸಾಟ. ಮೋಸ ಅರಿಯದ ಜೀವಿ ಆದರು ಜಗತ್ತನೇ ಗೆಲ್ಲುವ ಬಯಕೆ . ತನ್ನ ನೋವಿಗಿಂತ ಬೇರೆಯವರ ನೋವಿಗೆ ಮಿಡಿಯುತಿತ್ತು ಎಂದೆಂದು ಆತನ ಹೃದಯ. ಬೇರೆಯವರ ದುಃಖಕ್ಕೆ ಕಂಬನಿ ಸುರಿಸುತಿದ್ದ ಸಹೃದಯಿ .. ಓ ದೇವರೇ ನಿನೆಂಥ ಪಾಪಿ, ಅದೊಂದು ಬೆಳೆಯುತಿದ್ದ ಮೊಗ್ಗು . ಹರೆಯದ ಯುವಕ ಆದರೆ ಎಂದೆಂದು ಮನಸಿನಿಂದ ಮಗು. ನಿಷ್ಯಬ್ದವಾಗಿಸಿದೆ ಆ ತೊದಲು ಮಾತುಗಳು ಬರಿ ಕ್ಷಣ ಮಾತ್ರದಲಿ . ಚಿಗುರಿನಲಿ ಚಿವುಟು ಹಾಕಿದೆ ಮತ್ತೊಂದು ಎಳೆಯ ಸಸಿಯನ್ನು , ನಿನ್ನ ಇರುವು ತೋರಿಸಬೇಕೆಂದು ... ನಿಮ್ಮ ಹರೀಶ (ಇದು ಕವನವಲ್ಲ, ನನ್ನ ಕಳೆದು ಹೋದ ಗೆಳೆಯನ ನೆನಪು ಮೂಡಿದಾಗ ಬರೆದ ಕೆಲವು ಸಾಲುಗಳಷ್ಟೇ...ಮಿಸ್ ಯೌ ಶಿವೂ ಸರ್)