ಮನಸ್ಸು

ಕಲುಷಿತವಾಗಿದೆ ಮನಸ್ಸು
ಹುಳುಕು ಕೊಳಕೆಲ್ಲ ತುಂಬಿ
ದುಂಬಿಯ ಬಯಕೆ ಹುಚ್ಚಿ
ಬಿಡು ನಿನಗ್ಯಾಕೆ ?
ಆಗಲಿಲ್ಲ ನೀನು ಪರಿಮಳ
ಸೂಸುವ ಹೂವು ...
ರಾಡಿಯಲ್ಲಿ ತೇಲುತ್ತಿರುವ ನಿನಗೆ
ಸಿಗುವದು ಸೊಳ್ಳೆಗಳ ಪ್ರೀತಿ,
ಎಂದೋ ಮಾರಿಬಿಟ್ಟೆ ನೀನು
ಮನುಷ್ಯತ್ವ, ನ್ಯಾಯ, ನೀತಿ.
ದೇವರ ಅಡಿಗೆ ಬಿಡು, ಯಾರದೋ
ಮುಡಿಗೂ ಸೇರದೆ ಹೋದೆ.
ಸಿಕ್ಕ ಸಿಕ್ಕವರ ಆಸೆಯ
ಬಯಕೆಯಲ್ಲಿ ಬಳಲಿ ಹೋದೆ ..
ಪಾಪ ನಿಸ್ಸಹಾಯಕ ಹೂವು
ಪಾಪಿ ಚಿ ನೀನೇಕೆ ಇನ್ನು ಕೆಲ
ಕಾಲ ತಾಳದೆ ಹೋದೆ....

ಹರ್ಷಾ

Comments

Popular posts from this blog

ಅವಳ ನೆನಪು

ನಾನು ಮತ್ತು ಅಮ್ಮನ ನೆನಪು

ಸೌಂದರ್ಯ