Posts

Showing posts from 2010

ಅವರು ಹೀಗೇಕೆ ?

ನನ್ನ ಸಣ್ಣ ಸಣ್ಣ ಆಸೆಗಳು ನೆರವೆರದಿದ್ದಾಗ ನನ್ನ ಮೇಲೆ ನನಗೆ ತಾಳಲಾಗದ ಕೋಪ , ತಾಪ .. ಒಂದು ಸಿಕ್ಕಾಗ ಮತ್ತೊಂದರ ಬಯಕೆ , ಎಂದು ಮುಗಿಯದ ಬೇಕು, ಒಂದರ ಹಿಂದೆ ಮತ್ತೊಂದು ಬಯಕೆ ... ನಮ್ಮಮ್ಮ ನಮ್ಮಪ್ಪ ಒಂಥರಾ ವಿಚಿತ್ರ, ಅವರ ಬಾಳಿನಲ್ಲಿ ಯಾವಾಗಲು ಬರಿ ನನ್ನ ಬಾಳಿನ ಬಣ್ಣ ಬಣ್ಣದ ಚಿತ್ರ .. ಅವರ ಬೇಕು- ಬೇಡಗಳು ಎಂದು ಅವರನ್ನು ಬಾಧಿಸಲೇ ಇಲ್ಲ, ಐಶಾರಮದ ಬದುಕು ಮತ್ತ್ಯಾವದೋ ಕನಸಿಲ್ಲ . ನಗು ನಗುತ್ತಲೇ ನೋವನ್ನೆಲ್ಲ ಅನುಭವಿಸಿದರು, ಕಷ್ಟಪಟ್ಟರು ಆದರು ನನಗೇಕೆ ಅದರ ಅರಿವು ಎಂದು ಆಗಲೇ ಇಲ್ಲ .. ನಿಮ್ಮ ಹರೀಶ ಬೀರಗೆ

ಮುಗ್ಧ

ಅವನೊಬ್ಬ ಮುಗ್ಧ , ಸ್ವಲ್ಪ ಹುಚ್ಚನೆ ಸರಿ, ಬದುಕು ಪೂರ್ತಿ ಸೆಣೆಸಾಟ. ಮೋಸ ಅರಿಯದ ಜೀವಿ ಆದರು ಜಗತ್ತನೇ ಗೆಲ್ಲುವ ಬಯಕೆ . ತನ್ನ ನೋವಿಗಿಂತ ಬೇರೆಯವರ ನೋವಿಗೆ ಮಿಡಿಯುತಿತ್ತು ಎಂದೆಂದು ಆತನ ಹೃದಯ. ಬೇರೆಯವರ ದುಃಖಕ್ಕೆ ಕಂಬನಿ ಸುರಿಸುತಿದ್ದ ಸಹೃದಯಿ .. ಓ ದೇವರೇ ನಿನೆಂಥ ಪಾಪಿ, ಅದೊಂದು ಬೆಳೆಯುತಿದ್ದ ಮೊಗ್ಗು . ಹರೆಯದ ಯುವಕ ಆದರೆ ಎಂದೆಂದು ಮನಸಿನಿಂದ ಮಗು. ನಿಷ್ಯಬ್ದವಾಗಿಸಿದೆ ಆ ತೊದಲು ಮಾತುಗಳು ಬರಿ ಕ್ಷಣ ಮಾತ್ರದಲಿ . ಚಿಗುರಿನಲಿ ಚಿವುಟು ಹಾಕಿದೆ ಮತ್ತೊಂದು ಎಳೆಯ ಸಸಿಯನ್ನು , ನಿನ್ನ ಇರುವು ತೋರಿಸಬೇಕೆಂದು ... ನಿಮ್ಮ ಹರೀಶ (ಇದು ಕವನವಲ್ಲ, ನನ್ನ ಕಳೆದು ಹೋದ ಗೆಳೆಯನ ನೆನಪು ಮೂಡಿದಾಗ ಬರೆದ ಕೆಲವು ಸಾಲುಗಳಷ್ಟೇ...ಮಿಸ್ ಯೌ ಶಿವೂ ಸರ್)

ಅಮ್ಮ

ಅಮ್ಮ ನನ್ನ ಬಾಳಿಗೆ ನೀನೆ ದಾರಿ ದೀಪ, ನಿನ್ನ ನೆನಪುಗಳು ಇರದ ಬದುಕು ತಾಳಲಾಗದ ಒಂದು ದೊಡ್ಡ ಶಾಪ . ದೂರವಾದೆ ನನ್ನ ಬಾಳಿನಿಂದ ನನ್ನನ್ನು ಎಕಾಂಗಿಯಾಗಿಸಿ, ಮತ್ತೆಂದು ಮರಳಿ ಬರದ ಲೋಕಕ್ಕೆ ನಿಶ್ಯಬ್ದವಾಗಿ ಪಯಣಿಸಿದೆ . ತಲೆಯ ಮೇಲೆ ಕೈಯಾಡಿಸದೇ ನೀನು, ಎದ್ದಾಗಲೆಲ್ಲ ನಾನು ನನ್ನ ಸುತ್ತಲೆಲ್ಲಾ ಬರಿ ಅಂಧಕಾರವೇ ಕವಿಯುತ್ತಿತ್ತು. ಹೆಜ್ಜೆ ಹೆಜ್ಜೆಗೂ ನನ್ನ ಕೈ ಹಿಡಿದು ನಡೆಸಿ, ಮುಗ್ಧ ಮಗುವಾಗಿಸಿದೆ. ನಾನೇನು ಮಾಡಲಿ ಈಗ ಈ ಕ್ರೂರ ಜಗತ್ತಿನಲಿ ನಾನು ಎಕಾಂಗಿಯಮ್ಮ. ನಿಮ್ಮ ಹರೀಶ್

ಕನಸು

ಕದಡಿದ ಕನಸಲಿ ನೋವಿನ ಮಡುವಿನಲ್ಲಿ ತೊಳಲಾಡುತ್ತಿದೆ ಮನಸು ನನ್ನರಿವೆ ನನಗಿರದೇ ಎಲ್ಲೆಲ್ಲೋ ಹರಿದು ಮನವು ಕೈ ಜಾರುತ್ತಿದೆ ಕನಸು ಮೌಲ್ಯ ಕಳೆದುಕೊಂಡ ಬದುಕು, ಶುಬ್ರ ಬಟ್ಟೆಯ ಹಿಂದೆ ಮುಚ್ಚಿದ್ ಈ ಮನಸು ಹುಳುಕು . ನನ್ನ ಮಾತಿಗೆ ನಾನೆ ಬದ್ಧನಲ್ಲ ಸುಮ್ಮನೆ ಗೊಣಗುತ್ತೇನೆ ನಿಮ್ಮೆಲ್ಲರ್ ನಡುವೆ ಜಾಣನಾಗಿ ಸಾಕಿನ್ನು ಮನಸೇ ಸಾಕಾಗಿದೆ ನನಗೆ, ಇಗಲಾದರು ಮೋಸ ಮಾಡದಿರು ನನಗೆ ... ನಿಮ್ಮ ಹರೀಶ್

ನನ್ನ ನೆಚ್ಚಿನ ಹಾಡು

http://www.youtube.com/watch?v=uP0vv6QgH3E

ನಮ್ಮ ಮನೆಯ ಜ್ಯೋತಿ

ನಮ್ಮ ಮನೆಯ ಜ್ಯೋತಿ ನಮ್ಮಮ್ಮ, ತನ್ನ ಬೆಳಕಿನಲಿ ನಮ್ಮನ್ನೆಲ್ಲ ಕೊನೆಯವರೆಗೂ ಬೆಳಗಿದಳು .... ನಮ್ಮ ಬಾಳಿನ ಪ್ರತಿ ಬಯಕೆಗಳನ್ನು ಕಾಮಧೆನುವಿಗು ಮಿಗಿಲಾಗಿ ಅವಳು ಪುರೈಸಿದಳು ..... ಮಿಗಿಲಾದ ದೊಡ್ಡ ದೊಡ್ಡ ಪ್ರಶ್ನೆ ನಮ್ಮ ಬದುಕಿನಲಿ ನಮ್ಮಮ್ಮ , ಅಪ್ಪಾಜಿಯ ಕಿರುನಗೆಯಲಿ ಕರಗಿದವು . ಅವರ ಕಣ್ಣಂಚಿನ ಆತಂಕ ಮನದಲ್ಲಿರುವ ನೋವುಗಳು , ನಮ್ಮೆದುರಿಗೆ ಎಂದು ಕಾಣದೆ ಮುಚ್ಚಿ ಹಾಗೆ ಹೋದವು .. ನಮ್ಮ ನಗುವಿನಲ್ಲಿ ನಕ್ಕು , ನಮ್ಮ ನೋವಿಗೆ ಮರುಗಿ ನಮಗಾಗಿ ನಿಮ್ಮ ಬದುಕೇ ಸವೆದು ಹೋದವು ...

ನಿರ್ಲಜ್ಜ ಮನಸು

ಮನಸೇ ನೀನೇಕೆ ಹೀಗೆ ? ತುಸು ನಾಚಿಕೆಯು ಬೇಡವೇ ನಿನಗೆ ಇನ್ನೆಷ್ಟು ದಿನ ನನ್ನನ್ನು ಓಡಿಸುವೆ ನಿನ್ನ ಆಸೆಯ ದಾಸನಾಗಿಸಿ ನನಗೆ ಎಷ್ಟು ಸಿಕ್ಕರೂ ಮತ್ತೆ ಬಯಸುವೆ, ಮಿತಿಮೀರಿದ ದುರಾಸೆಯಲ್ಲಿ ... ಸಾಕಿನ್ನು ನಾನಿಲ್ಲ ನಿನ್ನ ದಾಸ, ನನ್ನ ಮತ್ತೆ ಕೇಳಬೇಕು ಇಂದಿನಿಂದ ನೀನು ಮುಂದೆ . ನಿಮ್ಮ ಹರೀಶ್

ನಾ ಬಯಸಿದ ಹೂವು

Image
ನಾ ಬಯಸಿದ ಹೂವು ನನ್ನದಾಗಲಿಲ್ಲ ಯಾರದು ಮುಡಿಸೇರಿ ಹೊರತು ನಿಂತಿತಲ್ಲಾ ಏನೆಲ್ಲ ಮಾಡಿದೆ ಮನಸೇ ನಿನಗೆ ತಿಳಿ ಹೇಳಲು .. ಆದರು ನೀನೇಕೆ ತಿಳಿಯಲಿಲ್ಲ ... ಮತ್ತೆ ಮತ್ತೆ ಅದೇ ಕೇಳುವೆ ಬದುಕು ಹೀಗೇಕೆ ? ಸಿಗಬಹುದು ಎಂದು ಗೊತ್ತಿದ್ದರು ಕೈ ಚಾಚಲಗದು ಬಾಳಲ್ಲಿ ... ಓ ಕ್ರೂರ ವಿಧೆಯೇ ಹೀಗೇಕೆ ಆಟವಾಡಿದೆ ನನ್ನ ಬಾಳಲ್ಲಿ .. ನಿಮ್ಮ ಹರೀಶ್

ನನ್ನ ಮಾತುಗಳು

ಮೌನವಾಗಲಿ ನನ್ನ ಮಾತುಗಳು ನನ್ನ ಅಂತರಂಗದಲ್ಲೇ ಸ್ಥಬ್ದವಾಗಿ ಯಾರಿಗೂ ನೋವನು ಕೊಡದೆ, ಚುಚ್ಚಲಿ ನನ್ನ ಹೃದಯಕೆ ಮುಳ್ಳಾಗಿ ..... ನನ್ನ ಮಾತುಗಳಲ್ಲಿ ನನ್ನತನದ ಪ್ರೀತಿಯಿಲ್ಲ, ವಿಷ ಕಾರುತ್ತಿವೆ ಸುತ್ತಲಿನ ಪರಿಸರದಲ್ಲಿ ಬರಿ ನೋವನ್ನೇ ಪಸರಿಸುತ ... ಸುಮ್ಮನಾಗುವ ಹರಸಾಹಸ ಮಾಡುತಿದ್ದೇನೆ ಆದರು ಹರಿದು ಬರುತ್ತವೆ ಲಂಗು ಲಗಾಮಿಲ್ಲದ ಕುದುರೆಯ ಹಗೆ ಬಾಯಿ ತಪ್ಪಿ .. ನನಗಾಗಿ ಬಾಳು ಸವೆಸಿದವರಿಗೆ ಬಿಸಿಕದಲೆಯಾಗಿ ನನ್ನ ಮಾತುಗಳು ಎಂದು ಮಾಸದ ಗಾಯ, ಕೊಡುತ್ತಿರಲು ನೋವ ತಾಳಲಾಗದು ದೇವರೇ ... ಸ್ಥಬ್ಧವಾಗಿಸು ನನ್ನುಸಿರು ಮುಂದೆಂದು ನಾನು ಮಾತಾಡದ ಹಾಗೆ.... ನಿಮ್ಮ ಹರೀಶ್

ಒಂದು ಸುಂದರ ಕನಸು

ಒಂದು ಸುಂದರ ಕನಸು ನೀಡು ತಾಯೆ ಜಗನ್ಮಾತೆ . ನಮ್ಮಮ್ಮನ ಮಡಿಲಿನಲ್ಲಿ ಮತ್ತೆ ಮಗುವಾಗಿಸು ನನ್ನ . ಎನನ್ನು ಅರಿಯದ ಆ ಹಸಿನಗೆ ನನ್ನ ಉಸಿರಾಗಲಿ ಮತ್ತೊಮ್ಮೆ ನನ್ನ ಈ ತುಟಿಗಳ ಹುಸಿನಗೆಯ ಮಾಸಿ ಮತ್ತೊಮ್ಮೆ ಶಿಶುವಾಗಿಸು. ಯಾರದೋ ನೋವಿಗೆ ಸ್ಪಂದಿಸುವ ಹೃದಯ ನಿಡು ನನಗೆ, ಬರಿ ಅಮೃತವೇ ಹೊರಹೊಮ್ಮಲಿ ನನ್ನದೆಯಲಿ, ಬತ್ತಿ ಹೋಗಲಿ ನನ್ನೆದೆಯಲಿ ವಿಷದ ಬುಗ್ಗೆ .. ತಿದ್ದಿ ತಿದ್ದಿ ನಮ್ಮಮ್ಮ ಕಲಿಸಿದ ಆ ಮುದ್ದು ಮುದ್ದು ಮಾತುಗಳು ರಾರಾಜಿಸಲಿ ನನ್ನ ತುಟಿಯ ಅಂಚಿನಲ್ಲಿ ಮರೆಮಾಚಿ ಕಪಟದ ಸವಿನುಡಿಯ .. ಎಂದು ಬತ್ತದ ಹಾಗೆ ನಮ್ಮಮ್ಮನ ಸವಿನೆನಹುಗಳು, ನನ್ನೆದೆಯಲೆಲ್ಲ ಬೆಳಗುತ್ತಿರಲಿ , ಎಂದೆಂದು ನನಗೆ ದಾರಿದೀಪವಾಗಿ .. ನಿಮ್ಮ ಹರೀಶ್

ಅಮ್ಮ

ಅಮ್ಮ, ಸೋತಿರುವನು ನಿನ್ನ ಮುದ್ದು ಕಂದ, ಕಾಲದ ಚಕ್ರವ್ಯುಹದಲಿ ಸಿಲುಕಿ ಏಕಾಂಗಿಯಾಗಿ .. ಬತ್ತಿ ಹೋಗುವ ಕನಸಿನ ಚಿಲುಮೆಯನು ಕಂಡು, ನಲುಗಿ ಹೋಗಿದೆ ಜೀವ ಸೋಲು ಸಾಕಾಗಿ .... ನನ್ನ ಕಣ್ಣಿಗೆ ಕನಸು ಕಟ್ಟುವ ಪರಿಯ ತಿಳಿಸಿ, ನನ್ನ ಬದುಕಿಗೆ ಸುಂದರ ಮುನ್ನುಡಿ ಬರೆದೆ ... ನೀನಿರುವಾಗ ಸೋಲಿನಲ್ಲು ನಲಿವಿತ್ತು ..ನನ್ನ ಬದುಕಿನಲಿ ಈಗ ಗೆಲುವಿನಲ್ಲು ನಲಿವಿಲ್ಲ ಅಮ್ಮ .... ಮರಳಿ ಬಾ ಮತ್ತೊಮ್ಮೆ ನನ್ನ ಬದುಕಿನಲಿ .. ತಲೆ ಸವರಿ ಮುತ್ತೊಂದ ಹಣೆಯ ಮೇಲೆ ಕೊಟ್ಟು ನಿಮ್ಮ ಹರ್ಷಾ

ಗೆಳತಿ,

ಗೆಳತಿ, ಮತ್ತೆ ನೆನಪಾಗುತಿದೆ , ಮಂಜಾದ ಕಣ್ಣು.. ನಿನ್ನ ಸುಪ್ತ ಕನಸುಗಳು ಬಾಡಿ ಹೋಗುವ ಹೆದರಿಕೆ ... ಲಕ್ಕಿ...ನಿನ್ನನ್ನು ಮರೆತು ತುಂಬಾ ದಿನವಾಗಿದೆ, ಹಾಗೆಂದು ಕೊಳ್ಳುತ್ತೇನೆ. ಮೊನ್ನೆ ತುಂಬಾನೇ ಖುಷಿಯಾಗಿದ್ದೆ, ಸುಮ್ಮನೆ ಹಾಗೆ ಸಂಜೆಯ ಹೊತ್ತಿನಲ್ಲಿ ಹೊರಗೆ ಚಹಾ ಕುಡಿಯೋಕ್ಕೆ ಹೋಗಿದ್ದೆ. ಒಂದು ಜೋಡಿ ಹಕ್ಕಿಗಳು ಆಫೀಸಿನ ಹೊರಗಡೆ ಸುತ್ತುತಿದ್ದವು. ಆ ಹುಡುಗಿಯ ಮೊಂಡು ಮುಗೂ ಆದೇಕೋ ಒಮ್ಮೆಲೇ ನಿನ್ನ ನೆನಪನ್ನು ಮತ್ತೆ ಹಸಿರಾಗಿಸಿತು. ತುಂಬಾನೇ ಪ್ರಯತ್ನ ಪಟ್ಟೆ ನೋಡಬಾರದೆಂದು ಆದರು ಮನಸ್ಸು ತಾಳಲೇ ಇಲ್ಲ, ಮನಸಿನಲಿ ಒಮ್ಮೆಲೇ ಮೇಲಿನ ಸಾಲುಗಳು ಸುಳಿದು ಹೋದವು. ಅಶೋಕ್ ಯೌ ಡೋಂಟ್ ಹ್ಯಾವ್ ವಿಲ್ ಪವರ್ ..... ಗೊತ್ತಿಲ್ಲ ಲಕ್ಕಿ ಬಹುಶ ನೀನು ನಿಜ ಇರಬಹುದು .. ಕೊನೆಗೂ ಒಂದು ಮಾತಂತೂ ನಿಜ , ನಮ್ಮ ಕನಸಿನ ಸಿಮೆಂಟ್ ನಿನಾಗಿದ್ದೆ, ಆದರೆ ನಾನು ಇಟ್ಟಿಗೆಯಾಗಲಿಲ್ಲ , ನಿನ್ನ ಮಾತು ಸತ್ಯ ಕಣೇ. ನನ್ನಲ್ಲಿ ಅದೇನು ಕಂಡೆ ಎಂದು ಪ್ರತಿ ಬರಿ ಕೇಳಿದಾಗ ನೀನು ಅದೇ ಹೇಳುತಿದ್ದೆ , ಏನ್ರೀ ಅದೆಷ್ಟು ಖುಷಿ ನನ್ನ ಬಾಯಿಂದ ನಿಮ್ಮನ್ನು ಹೊಗಳಿಸಿ ಕೊಳ್ಳಬೇಕು ಎನ್ನುವ ತವಕ. ಅಶೋಕ, ಎಲ್ಲರ ಪ್ರೀತಿ ಪಯಣದಲ್ಲಿ ಪ್ರಾರಂಭ ತುಂಬಾ ಕಷ್ಟ. ಆದರೆ ನಮ್ಮ ಪ್ರೀತಿ ನೋಡು ಎಷ್ಟೊಂದು ವಿಚಿತ್ರ. ಪ್ರೀತಿ ಶುರು ಮಾಡಬೇಕಾದರೆ ಬ್ರೇಕ್ ಅಪ್ ಡೇಟ್ ಕೂಡ ಫಿಕ್ಸ್ ಮಾಡಿ ಆಗಿದೆಯೆಂದು ಎಷ್ಟೊಂದು ಸಲೀಸಾಗಿ ನಗುತಲಿದ್ದೆ. ನನಗೆ ಹುಡುಗಿಯರ ಸ್ನೇಹ ಹೊಸದೆ

ಮನಸ್ಸು

ಕಲುಷಿತವಾಗಿದೆ ಮನಸ್ಸು ಹುಳುಕು ಕೊಳಕೆಲ್ಲ ತುಂಬಿ ದುಂಬಿಯ ಬಯಕೆ ಹುಚ್ಚಿ ಬಿಡು ನಿನಗ್ಯಾಕೆ ? ಆಗಲಿಲ್ಲ ನೀನು ಪರಿಮಳ ಸೂಸುವ ಹೂವು ... ರಾಡಿಯಲ್ಲಿ ತೇಲುತ್ತಿರುವ ನಿನಗೆ ಸಿಗುವದು ಸೊಳ್ಳೆಗಳ ಪ್ರೀತಿ, ಎಂದೋ ಮಾರಿಬಿಟ್ಟೆ ನೀನು ಮನುಷ್ಯತ್ವ, ನ್ಯಾಯ, ನೀತಿ. ದೇವರ ಅಡಿಗೆ ಬಿಡು, ಯಾರದೋ ಮುಡಿಗೂ ಸೇರದೆ ಹೋದೆ. ಸಿಕ್ಕ ಸಿಕ್ಕವರ ಆಸೆಯ ಬಯಕೆಯಲ್ಲಿ ಬಳಲಿ ಹೋದೆ .. ಪಾಪ ನಿಸ್ಸಹಾಯಕ ಹೂವು ಪಾಪಿ ಚಿ ನೀನೇಕೆ ಇನ್ನು ಕೆಲ ಕಾಲ ತಾಳದೆ ಹೋದೆ.... ಹರ್ಷಾ

ಕವಿತೆ

Image
ಎಲ್ಲಿ ಹೋದೆ ಕವಿತೆ ನನ್ನಿಂದ ದೂರವಾಗಿ ಒಮ್ಮೆ ಮಿಂಚಿ ಮರುಕ್ಷಣದಲ್ಲೇ ನನ್ನ ಬಾಳಿಂದ ಮರೆಯಾಗಿ ನನ್ನ ಬದುಕು ಸುಂದರ ಹೂದೊಟವಾಗಿಸಿದ್ದೆ ನೀನು ಹೂವಿರದ ತೋಟಕ್ಕೆ ಬೇಲಿಯ ಹೊರೆಯೇಕೆ ? ನನ್ನ ಹೊಟ್ಟೆಯ ಹಸಿವಾಗಿದ್ದೆ , ನನ್ನಯ ಕಣ್ಣಿನ ನಿದ್ದೆ . ಅರ್ಥವಿರದ ನನ್ನ ಬದುಕಿಗೆ ನೀನೆ ಅರ್ಥ ಕೊಟ್ಟಿದ್ದೆ. ಬಾ ಕವಿತೆ ಬಿಡು ಸಾಕು ಈ ಕೋಪ, ತಾಪ ನೆನಪಿರಲಿ ನಿನಗೆ ನೀನಿರದ ಬದುಕು ನನಗೆ ಒಂದು ಶಾಪ . ಹರ್ಷಾ