ನಿನ್ನ ನೆನಪು ಇಂದು ಅಮ್ಮ ನನಗೆ ಮತ್ತೆ ಮತ್ತೆ ಕಾಡುತಿದೆ..... ನೀನಿಲ್ಲದ ಬದುಕು ಏಕೋ ಇಂದು ತುಂಬಾ ಬೇಸರ ಎನಿಸುತಿದೆ.... ರೆಪ್ಪೆ ಮುಚ್ಚಲು ಹೆದರುವದು ಕಣ್ಣೀರ್ ಹನಿಗಳು ಯಾರಿಗೂ ಕಾಣದಿರಲಿ ಎಂದು ತಲೆಯ ಮೇಲೆ ಯಾರಾದರೂ ಕೈ ಇಟ್ಟರು ಹೀಗೆ, ಹಿಂತುರುಗಿ ನೋಡುವೆ ನೀನಿರಬಹುದು ಎಂದು ಮುಂಜಾವಿನಲಿ ರಂಗೋಲಿ ಹಾಕುವ ಹೆಣ್ಣುಮಕ್ಕಳಾತ್ತ ಕದ್ದು ನೋಡುವೆ ನಿನ್ನ ಮುಖ ಕಾಣಿಸಬಹುದು ಎಂದು ಪ್ರತಿ ದಿನ ಬಹಳ ಹೊತ್ತಿನವರೆಗೂ ಮಲಗುವೆ ನೀನು ಹಣೆಯ ಮೇಲೆ ಮುತ್ತಿಕ್ಕಿ ಎಬ್ಬಿಸುವೆಯೆಂದು
ಎಲ್ಲಾ ಭಾವನೆಗಳು ಹರಿಯಬಿಡಲಾಗುವದಿಲ್ಲಾ ಕೆಲವೊಂದು ಮುಚ್ಚಿಡಬೇಕು ಬಚ್ಚಿಡಬೇಕು, ಹೃದಯದಲಿ ಧುಮ್ಮುಕ್ಕಿ ಹರಿಯುತಿದ್ದರೂ ತುಟಿಯಂಚಿನಲ್ಲಿ ಬಾರದ ಹಾಗೆ ನಾಲಿಗೆಯನ್ನೇ ಅಡ್ಡಗೋಡೆಯಾಗಿಸಬೇಕು. ನೀ ಕೊಟ್ಟ ರಸನಿಮಿಶಗಳನ್ನು ಒಬ್ಬನೇ ಸವಿದಿದ್ದೆ ಕೆಲವೊಮ್ಮೆ ನಾ ಸ್ವಾರ್ಥಿಯಾಗಿ, ಮತ್ತೇ ನೋವನ್ನು ಹಂಚಿಕೊಳ್ಳಲಿಕ್ಕೆ ಮತ್ತ್ಯಾರದೋ ಭುಜವನ್ನೇಕೆ ಹುಡುಕಬೇಕು? ನೋವಿರಲಿ ನಲಿವಿರಲಿ ಕಣ್ಣು ಮುಚ್ಚಿ ನಿನ್ನಲ್ಲಿ ಒಂದಾಗಲೇಬೇಕು. ಕವನಕ್ಕೆ ದಕ್ಕದ ನೂರಾರು ಭಾವನೆಗಳು ಹೃದಯದಲ್ಲೇ ಮೌನ ರಾಗ ಹಾಡಬೇಕು..
Comments