ಮುಗ್ಧ

ಅವನೊಬ್ಬ ಮುಗ್ಧ , ಸ್ವಲ್ಪ
ಹುಚ್ಚನೆ ಸರಿ, ಬದುಕು
ಪೂರ್ತಿ ಸೆಣೆಸಾಟ.
ಮೋಸ ಅರಿಯದ ಜೀವಿ
ಆದರು ಜಗತ್ತನೇ ಗೆಲ್ಲುವ
ಬಯಕೆ .
ತನ್ನ ನೋವಿಗಿಂತ ಬೇರೆಯವರ
ನೋವಿಗೆ ಮಿಡಿಯುತಿತ್ತು
ಎಂದೆಂದು ಆತನ ಹೃದಯ.
ಬೇರೆಯವರ ದುಃಖಕ್ಕೆ
ಕಂಬನಿ ಸುರಿಸುತಿದ್ದ
ಸಹೃದಯಿ ..
ಓ ದೇವರೇ ನಿನೆಂಥ
ಪಾಪಿ, ಅದೊಂದು
ಬೆಳೆಯುತಿದ್ದ ಮೊಗ್ಗು .
ಹರೆಯದ ಯುವಕ
ಆದರೆ ಎಂದೆಂದು
ಮನಸಿನಿಂದ ಮಗು.
ನಿಷ್ಯಬ್ದವಾಗಿಸಿದೆ ಆ
ತೊದಲು ಮಾತುಗಳು
ಬರಿ ಕ್ಷಣ ಮಾತ್ರದಲಿ .
ಚಿಗುರಿನಲಿ ಚಿವುಟು ಹಾಕಿದೆ
ಮತ್ತೊಂದು ಎಳೆಯ
ಸಸಿಯನ್ನು , ನಿನ್ನ ಇರುವು
ತೋರಿಸಬೇಕೆಂದು ...

ನಿಮ್ಮ
ಹರೀಶ
(ಇದು ಕವನವಲ್ಲ, ನನ್ನ ಕಳೆದು ಹೋದ ಗೆಳೆಯನ ನೆನಪು ಮೂಡಿದಾಗ ಬರೆದ ಕೆಲವು ಸಾಲುಗಳಷ್ಟೇ...ಮಿಸ್ ಯೌ ಶಿವೂ ಸರ್)

Comments

lokesh shastri said…
nice one...
LOKESH SHASTRI
manojkumar said…
Heart touching feelings in depth.very nice Harish.....
ಹರ್ಷಾ said…
ಮನೋಜ ನಿಮ್ಮ ಅಭಿಪ್ರಾಯಗಳಿಗೆ ತುಂಬಾ ಧನ್ಯವಾದಗಳು

Popular posts from this blog

ನಾನು ಮತ್ತು ಅಮ್ಮನ ನೆನಪು

ಅವಳ ನೆನಪು

ಸೌಂದರ್ಯ